tag:blogger.com,1999:blog-2037979210344114254.post145783454342219665..comments2024-01-17T18:35:45.394+05:30Comments on ನನ್ನ ಬರಹಗಳು: ಕನ್ನಡಕೆ ಹೋರಾಡು ಕನ್ನಡವ ಕಾಪಾಡು ಕನ್ನಡದ ಕಂದಾ...Manjunatha Kollegalahttp://www.blogger.com/profile/06597757236883289208noreply@blogger.comBlogger3125tag:blogger.com,1999:blog-2037979210344114254.post-26496381949484140312019-08-22T09:42:00.855+05:302019-08-22T09:42:00.855+05:30ಬಾಲು, ವಾಸ್ತವದಲ್ಲಿ ಭಾಷೆಯೊಂದೇ ಏನೂ ಅಲ್ಲವೇ ಅಲ್ಲ. ಅದು ...ಬಾಲು, ವಾಸ್ತವದಲ್ಲಿ ಭಾಷೆಯೊಂದೇ ಏನೂ ಅಲ್ಲವೇ ಅಲ್ಲ. ಅದು ತನ್ನೊಡನೆ ತರುವ ಸಂಸ್ಕೃತಿ, ಜೀವನಶೈಲಿ, ಧೋರಣೆ ಇವೆಲ್ಲವೂ ಅದರ 'ತನ'ವನ್ನು ಕಟ್ಟಿಕೊಡುತ್ತವೆ. ಹೊರಗಿನಿಂದ ಬಂದ ಈ 'ತನ' ಇಲ್ಲಿನ ಕನ್ನಡ'ತನ'ವನ್ನು ಹಾಳುಗೆಡವುತ್ತಿದೆ ಎನ್ನುವುದೇ ನಮ್ಮೆಲ್ಲರ ಕಳಕಳಿ.<br /><br />ಆದರೆ ಯಾವುದೋ ನಿರ್ದಿಷ್ಟ ಜನಾಂಗ ಹಾಗೆಲ್ಲ ಮಾಡುತ್ತಿದೆ ಎಂದು ಆರೋಪಿಸಬೇಕಾದರೆ ಅದಕ್ಕೆ ಗಟ್ಟಿಯಾದ ಆಧಾರ ಬೇಕಾಗುತ್ತದೆ. ಜಾತಿ-ಜನಾಂಗ-ಸಮುದಾಯದ ಬಗೆಗಿನ ಪೂರ್ವಗ್ರಹಗಳೊಂದಿಗೆ ಹಾಗೆ ಆರೋಪಿಸುವುದು ಸಲ್ಲದು - ಮಾರವಾಡಿಗಳೆಲ್ಲರೂ ತಿಂಡಿಪೋತರು, ಹಿಂದಿಯವರೆಲ್ಲರೂ ಉಡಾಳರು, ತಮಿಳರೆಲ್ಲರೂ ಕೆಟ್ಟವರು, ಕನ್ನಡಿಗರೆಲ್ಲರೂ ಜಗಳಗಂಟರು - ಹೀಗೆ. ಮಾರವಾಡಿ ಸಮುದಾಯ ನಮ್ಮಲ್ಲಿಗೆ ಈಗ ಐಟಿಯ ಪ್ರವೇಶದೊಡನೆ ಬಂದದ್ದಲ್ಲ. ಬಹುಕಾಲದಿಂದ ನಮ್ಮೊಡನೆ ಬದುಕಿದ್ದಾರೆ, ನಮ್ಮೊಡನೆ ಬೆರೆತು ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲರಲ್ಲೂ ಇರುವಂತೆ ಅವರಲ್ಲೂ ದುಷ್ಟರು ಇಲ್ಲದಿಲ್ಲ, ಆದರೆ ಬಹುತೇಕ ತಮ್ಮ ವ್ಯವಹಾರವನ್ನು ತಾವು ನೋಡಿಕೊಂಡು ಹೋಗುತ್ತಾರೆ. ಹೌದು, ಆಸ್ತಿ ಖರೀದಿಸುತ್ತಾರೆ ನಿಜ, ದುಡ್ಡಿದೆ ಖರೀದಿಸುತ್ತಾರೆ. ನಾವೂ ಅದಕ್ಕೆ ಸಡ್ಡುಹೊಡೆಯುವಷ್ಟು ವ್ಯವಹಾರಗಳನ್ನು ಬೆಳೆಸಿ ಆಸ್ತಿ ಖರೀದಿಸಬಾರದೆಂದೇನಿಲ್ಲ. ಅವರು ಸರ್ಕಾರದ ಕೃಪಾಪೋಷಣೆಯಲ್ಲೂ ಬದುಕಿಲ್ಲ.<br /><br />ಆಧುನಿಕ ಕಾಲದಲ್ಲಿ ಉತ್ತರದವರ ದಾಂಧಲೆ ಆರಂಭವಾಗಿದ್ದೇ ಐಟಿ ಉದ್ಯಮದ ಹಾವಳಿಯಿಂದ. ಅದಕ್ಕೆ ಮುಂಚಿನೆ ಹಿಂದೀ ವಾಲಾಗಳ ಹಾವಳಿ ಕೇಂದ್ರದ ರಾಜಕಾರಣದಿಂದ ಬಂದದ್ದು. ಇದು ಎಷ್ಟೋ ಕಾಲದಿಂದ ನಡೆದಿರುವ ಘರ್ಷಣೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-42567898320107503072019-08-21T21:48:43.071+05:302019-08-21T21:48:43.071+05:30ಒಳ್ಳೆಯ ವಿಮರ್ಶೆ.
ಆದ್ರೆ ಸದರಿ ಭಾಷಾವಿರೋಧ ಹೋರಾಟವು, ಭಾಷ...ಒಳ್ಳೆಯ ವಿಮರ್ಶೆ. <br />ಆದ್ರೆ ಸದರಿ ಭಾಷಾವಿರೋಧ ಹೋರಾಟವು, ಭಾಷೆಯನ್ನೂ ಮೀರಿ.. ಕನ್ನಡ ಸಂಸ್ಕೃತಿ, ಜನಜೀವನ ನಾಶ!.. ಇತ್ಯಾದಿ ರೂಪವನ್ನು ತಾಳುತ್ತಿರುವುದು ನೀವು ಗಮನಿಸಿರಬಹುದು.<br />ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಸಾಹಿತಿಗಳೊಬ್ಬರು, ಬೆಂಗಳೂರು, ಡೀವಿಜಿ ಕಾಲದಲ್ಲಿ ಚೆನ್ನಾಗಿದ್ದು, ತದ ನಂತರ ಮಾರವಾಡಿಗಳ ಹಾವಳಿಗೆ ಸಿಲುಕಿ ಬೆಂಗಳೂರಿಗರು ರಾತ್ರಿ ಪಾರ್ಟಿ ಮಾಡುವುದು, ತಿಂಡಿ ಪೋತರಾಗಿದ್ದಾರೆ ... ಎಂದು ಆರೋಪಿಸಿದ್ದಾರೆ. <br />ಅದೂ ಅಲ್ಲದೆ, <br />ಆ ಧಾರ್ಮಿಕ ಕಾರ್ಯಕ್ರಮವು ತೀರಾ ಅವರ ವಯಕ್ತಿಕ ಆಗಿದ್ದರೂ.. <br />ಜೈನ ಬಸದಿಗಳಲ್ಲಿ ಮೇಲು - ಕೀಳು, ಚರ್ಮದ ಬಣ್ಣ, ಎಂಬೆಲ್ಲಾ ಅಸಮಾನತೆ ಇದೆಯಂತೆ.<br />so <br />ಅಲ್ಲಿ ಧಾಳಿ ಮಾಡಿದ್ದು ಸರಿ ಅಂತೆ. ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-2037979210344114254.post-12441934598431502232019-08-21T15:05:00.996+05:302019-08-21T15:05:00.996+05:30This comment has been removed by the author.ಬಾಲುhttps://www.blogger.com/profile/14692063966558914325noreply@blogger.com