tag:blogger.com,1999:blog-2037979210344114254.post1199790269848145390..comments2024-01-17T18:35:45.394+05:30Comments on ನನ್ನ ಬರಹಗಳು: ನಮ್ಮ ಮೋಜುಗಳೀಗ ಮುಗಿದಿಹುದುManjunatha Kollegalahttp://www.blogger.com/profile/06597757236883289208noreply@blogger.comBlogger3125tag:blogger.com,1999:blog-2037979210344114254.post-53995501595727550902022-05-05T20:12:34.091+05:302022-05-05T20:12:34.091+05:30ಚೆನ್ನಾಗಿದೆ. ಮುಂದುವರೆಸಿಚೆನ್ನಾಗಿದೆ. ಮುಂದುವರೆಸಿAnonymousnoreply@blogger.comtag:blogger.com,1999:blog-2037979210344114254.post-19905687845916288642019-05-14T18:57:47.503+05:302019-05-14T18:57:47.503+05:30ಸುನಾಥರೇ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಪ್ರಶ...ಸುನಾಥರೇ, ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆ ಬಹಳ ಪ್ರಸ್ತುತವಾದದ್ದು, ಹಲವು ಅನುವಾದಕರನ್ನು ಕಾಡಿದ್ದು. ಇದೇ ಪ್ರಶ್ನೆಯು ಆಧುನಿಕ ಕವಿ/ಅನುವಾದಕರಿಂದ ಸರಳಗನ್ನಡದಲ್ಲಿ ಸೊಗಸಾದ ಅನುವಾದಗಳು ಮೂಡಿಬರಲೂ ಕಾರಣವಾಯಿತು. ಸರಿ, ಹಳೆಯಕಾಲದ ಶೇಕ್ಸ್ಫಿಯರನ್ನು ಹೊಸಗಾಲದ ಕನ್ನಡ ಓದುಗರಿಗೆ ತಲುಪಿಸಿದ್ದಾಯಿತು, ಅಷ್ಟುಮಟ್ಟಿಗೆ ಹೊಸ ಅನುವಾದಗಳು ಯಶಸ್ವಿಯೂ ಆದುವು. ಆದರೆ ನಿಮ್ಮ ಮೂಲಪ್ರಶ್ನೆ - ಕನ್ನಡ ಅನುವಾದವು ಎಡಚಾಗುವ ಅವಶ್ಯಕತೆ ಇದೆಯೇ - ಹಾಗೆಯೇ ಉಳಿಯಿತು. ಅದನ್ನಿಷ್ಟು ಪರಿಶೀಲಿಸುವ ಅಗತ್ಯವಿದೆಯೆನ್ನಿಸುತ್ತದೆ.<br /><br />ಈ ಪ್ರಶ್ನೆಯನ್ನು ಇನ್ನಷ್ಟು ವಿಶಾಲವಾದ ಸಂದರ್ಭದಲ್ಲಿ ಇಟ್ಟು ನೋಡಿದರೆ, ಕೇವಲ ಹಳೆಯ ಇಂಗ್ಲಿಷಿನ ಅನುವಾದವೇ ಏಕೆ, ಹಳಗನ್ನಡದ ಮೂಲಪಠ್ಯವನ್ನೂ ಹೊಸ ಕಾಲದ ಕನ್ನಡಕ್ಕೆ ಅನುವಾದಿಸುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಯೇಳುತ್ತದೆ - "ಪಂಪನ ಮರು ಓದು" ಇತ್ಯಾದಿಯಾಗಿ ಹೊಸ ಕಾಲದ ಅನೇಕ ಸಾಹಿತಿಗಳು ಮಾತಾಡುತ್ತಿದ್ದಾರೆ. ಅಂತಹ ಪ್ರಯತ್ನಗಳೂ ಸಾಕಷ್ಟು ನಡೆದಿದಿವೆ, ಉದಾಹರಣೆಗೆ ಕುವೆಂಪು ರಾಮಾಯಣದ ಸರಳ 'ಅನುವಾದ' ರಾಮಾಯಣದರ್ಶನಂ ವಚನಚಂದ್ರಿಕೆ (ದೇಜಗೌ).<br /><br />ಇಂಥಲ್ಲೆಲ್ಲಾ ನಾವು ಅನುವಾದದಿಂದ ಏನು ಸಾಧಿಸಬಯಸುತ್ತೇವೆಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಮುಖ್ಯವೆನಿಸುತ್ತದೆ - ಅರ್ಥವೇ, ಭಾಷೆಯೇ, ಭಾವವೇ, ಸಂದರ್ಭವೇ? ಕೇವಲ ಅರ್ಥವನ್ನಷ್ಟೇ ಅನುವಾದಿಸಬೇಕೆಂದಿದ್ದರೆ ಬರೆಯ ಸಾರಾಂಶವನ್ನಷ್ಟೇ ಹೇಳಿದರೆ ಆಯಿತಲ್ಲ, ಅನುವಾದದ ಅಗತ್ಯವೇ ಬರುವುದಿಲ್ಲ. ರಾಮನು ಹುಟ್ಟಿ, ಸೀತೆಯನ್ನು ಮದುವೆಯಾಗಿ, ಆನಂತರ ತಾಯಿಯ ದುರಾಸೆಯಿಂದ, ಪಿತೃವಾಕ್ಯಪರಿಪಾಲನೆಗಾಗಿ ತಮ್ಮ ಮತ್ತು ಹೆಂಡತಿಯೊಡನೆ ಕಾಡುಪಾಲಾಗಿ, ಆನಂತರ ರಾವಣನಿಂದ ಸೀತಾಪಹರಣವಾಗಿ, ರಾಮನು ವಾನರಸಖ್ಯದಿಂದ ಸಮುದ್ರಕ್ಕೆ ಸೇತುವೆ ಕಟ್ಟಿ ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದು, ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷಿಕ್ತನಾದನು - ಇಷ್ಟರಲ್ಲಿ ಇಡೀ ರಾಮಾಯಣದ ಕತೆ ಬಂದುಬಿಟ್ಟಿತು, ಆದರೆ ರಾಮಾಯಣದ ಕಾವ್ಯ ಬರಲಿಲ್ಲ. ಅಥವಾ ಮೂಲಶ್ಲೋಕವನ್ನೇ ತೆಗೆದು ವಾಕ್ಯವಾಕ್ಯಗಳನ್ನೇ ಅನುವಾದಿಸಿದರೂ ಅನುವಾದವಾಗುವುದಿಲ್ಲ, ಪದಪದ ಅನುವಾದಿಸಿದರಂತೂ ಭಾವವೇ ಕಳೆದುಹೋಗುವ ಅಪಾಯವೂ ಉಂಟು. ಮೂಲದಲ್ಲಿ ಕವಿ ಬಳಸುವ ಪದಕ್ಕೆ ಅದೆಂಥದೋ ಧ್ವನಿಶಕ್ತಿಯಿರುತ್ತದೆ - ಅದು ಆ ಪದದ ವಿನ್ಯಾಸದಿಂದ ಬಂದದ್ದಿರಬಹುದು, ಅರ್ಥದಿಂದ ಬಂದದ್ದಿರಬಹುದು, ಆ ಪದವನ್ನು ಬಳಸಿದ ಸಂದರ್ಭದಿಂದ, ಅಥವಾ ಕೊನೆಗೆ ಉಚ್ಚಾರಣಾವಿಧಾನದಿಂದಲೂ ಬಂದದ್ದಿರಬಹುದು. ಅನುವಾದಕನು ಅದಕ್ಕೆ ತಕ್ಕ ಪದವನ್ನು ತನ್ನ ಭಾಷೆಯಲ್ಲಿ ಆಯ್ದುಕೊಳ್ಳುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ, ಮೂಲದ ಒಂದು ಪದಕ್ಕೆ ತನ್ನ ಮುಂದೆ ಬಂದು ನಿಲ್ಲುವ ಹತ್ತು ಪದಗಳಲ್ಲಿ ಪರಮಾಯಿಶಿಯಾದ ಒಂದನ್ನು ಜಾಗರೂಕವಾಗಿ ಆಯಬೇಕಾಗುತ್ತದೆ. ಹೀಗೆ ಮಾಡುವಾಗ ಅದು ಮೂಲಕ್ಕೆ ಸರ್ವವಿಧದಲ್ಲೂ ಹತ್ತಿರವಿರಬೇಕಷ್ಟೇ ಅಲ್ಲ, ಮೂಲವನ್ನು ಮೀರಿನಿಲ್ಲಬಾರದೆಂಬ ಎಚ್ಚರವೂ ಇರಬೇಕಾಗುತ್ತದೆ (ಕವಿಗಿಂತ ಅನುವಾದಕನು ಶಕ್ತಕವಿಯಾದಾಗ ಹೀಗಾಗುವ ಅಪಾಯ ಹೆಚ್ಚು) ಹೀಗಿರುವಾಗ, ಅನುವಾದದಲ್ಲಿ ಅರ್ಥವಾಗುವುದು ಮಾತ್ರ ಮುಖ್ಯ ಎನ್ನುವ ಮಾತು ನಿಲ್ಲಲಾರದು. ಮೂಲಪಠ್ಯ ಎಷ್ಟು ಹಳೆಯದು, ಅದು "ಆ ಕಾಲದ" ಜನಕ್ಕೆ ಎಷ್ಟು ಹತ್ತಿರವಾಗಿತ್ತು ಎಂಬುದರೊಂದಿಗೇ ಈ ಕಾಲದ ಅದೇ ಭಾಷೆಯ ಜನಕ್ಕೆ ಎಷ್ಟು ದೂರವಿದೆಯೆಂಬುದನ್ನೂ ಅನುವಾದಕ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದು 'ಈಗಿನ' ಜನಕ್ಕೆ ಅಷ್ಟು 'ದೂರ'ವಿರುವುದರಿಂದಲೇ ಅದಕ್ಕೊಂದು 'ಕ್ಲಾಸಿಕಲ್' ಸ್ಪರ್ಷವಿದೆ. ಅದನ್ನೇ ನಮ್ಮ ಭಾಷೆಯಲ್ಲಿ ತರಬೇಕಾದರೆ ನಮ್ಮ ಅನುವಾದದ ಭಾಷೆಯೂ 'ಈಗಿನ' ಭಾಷೆಯಿಂದ ಅಷ್ಟೇ ಹಳಮೆಯನ್ನು ಕಾಯ್ದುಕೊಂಡರೆ ಮೂಲದ 'ತೂಕ' ಇಲ್ಲಿಯೂ ಬರಲು ಸಾಧ್ಯ - ಇದು ಬಹುಮಟ್ಟಿಗೆ ನನ್ನ (ಹಾಗೂ ಇತರ ಹಿರಿಯ/ಹಿಂದಿನ ತಲೆಮಾರಿನ ಅನುವಾದಕರ) ದೃಷ್ಟಿ. ಜೊತೆಗೆ, ಮೂಲದಲ್ಲಿ ಲಯ, ಛಂದಸ್ಸುಗಳ ಬಳಕೆಯಿದ್ದರೆ ಅಂಥವನ್ನೇ ಇಲ್ಲೂ ತರುವಲ್ಲಿ ಈ ಭಾಷಾಶಿಸ್ತು ಬಹಳ ಸಹಕಾರಿ. ಉದಾಹರಣೆಗೆ ಇದೇ ಪದ್ಯವನ್ನು 'ಹೊಸಗನ್ನಡ'ದಲ್ಲಿ ಹೀಗೆ ಅನುವಾದಿಸಬಹುದು ನೋಡಿ:<br /><br />ನಮ್ಮ ಮೋಜುಗಳು ಈಗ ಮುಗಿದಿವೆ, ಈ ನಟರು<br />ಮೊದಲೇ ಹೇಳಿದಹಾಗೆ ಬರಿ ಗಾಳಿಗಳು ಮತ್ತೆ<br />ಎಲ್ಲರೂ ಗಾಳಿಯೊಳಗೆ ಗಾಳಿಯಾಗಿ ಕರಗಿಹೋದರು<br />ಮತ್ತೆ, ಈ ಬುಡವಿಲ್ಲದ ಕನಸಿನಂತೆ<br />ಮೋಡದ ಟೋಪಿಯ ಕಂಬಗಳು, ಭಾರೀ ಅರಮನೆಗಳು<br />ಪವಿತ್ರ ಗುಡಿಗಳು, ಈ ಪ್ರಪಂಚವೇ<br />ಹೂಂ, ಅದರೊಡನೆ ಇದ್ದುದೆಲ್ಲ, ಕರಗಿಹೋಗಬೇಕು<br />ಮತ್ತೆ, ಒಂದು ಕುರುಹೂ ಬಿಡದೇ <br />ಖಾಲಿ ನಾಟಕ ಕರಗಿಹೋದಹಾಗೆ.<br />ನಾವು ಕನಸಿನಂತಹ ವಸ್ತುಗಳಿಂದ ಮಾಡಲ್ಪಟ್ಟವರು<br />ನಮ್ಮ ಚಿಕ್ಕ ಬದುಕು ನಿದ್ದೆಯಿಂದ ಸುತ್ತುವರಿದಿದೆ.<br /><br />ಈ ಅನುವಾದದಲ್ಲೂ ಮೂಲದ ಲಯವಿಲ್ಲ, ಭಾಷೆಯ ಬಳುಕಿಲ್ಲ, ಬಳಸಿದ ಪದಗಳಲ್ಲಿ ಮೂಲದ ತೂಕವೂ, ನವುರೂ, ಚೆಲುವೂ ಇಲ್ಲ. ಅರ್ಥ ಮಾತ್ರ ಸರಿಸುಮಾರು ಮೂಲವನ್ನೇ ಹೋಲುತ್ತದೆ. ನಮ್ಮ ಉದ್ದೇಶ ಅಷ್ಟೇ ಆದರೆ, ಇದನ್ನು ಅನುವಾದವೆಂದು ಒಪ್ಪಬಹುದು. ಆದರೆ ಅನುವಾದದ ಉದ್ದೇಶ ಇಷ್ಟಕ್ಕೆ ಸೀಮಿತವಾಗದು.<br /><br />ಕೆಲವರ್ಷಗಳ ಹಿಂದೆ ಸರಿಸುಮಾರು ಇದೇ ವಿಷಯದ ಬಗ್ಗೆ (ಹಳಗನ್ನಡದಿಂದ ಹೊಸಗನ್ನಡಕ್ಕೆ ತರುವ ಬಗ್ಗೆ) ಫೇಸ್ಬುಕ್ಕಿನಲ್ಲೊಂದು ಚರ್ಚೆ ನಡೆದಿತ್ತು. ಅದು ನಿಮಗೆ ಅಸಕ್ತಿಯುಂಟುಮಾಡಬಹುದೆಂದು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ:<br /><br />https://www.facebook.com/ksmanjunatha/posts/10153058356744500?comment_id=10155026469779500&comment_tracking=%7B%22tn%22%3A%22R0%22%7DManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-2037979210344114254.post-75879542747985668552019-05-07T19:40:01.256+05:302019-05-07T19:40:01.256+05:30ನೀವು ನೀಡಿದ ಟಿಪ್ಪಣಿಗಳಿಂದಾಗಿ, ನೀವು ಬಳಸಿದ ಪದಗಳ ಔಚಿತ್ಯ...ನೀವು ನೀಡಿದ ಟಿಪ್ಪಣಿಗಳಿಂದಾಗಿ, ನೀವು ಬಳಸಿದ ಪದಗಳ ಔಚಿತ್ಯ ಮನದಟ್ಟಾಯಿತು. ಶೇಕ್ಸಪಿಯರನ ಮೂಲಕ್ಕೆ ಕುಂದಾಗದಂತೆ ಭಾಷಾಂತರಿಸಿದ್ದಿರಿ. ಆದರೆ ನನ್ನ ಮನದಲ್ಲಿ ಒಂದು ಸಂದೇಹ ಉಳಿದಿದೆ. ಶೇಕ್ಸಪಿಯರನ ಈ ನಾಟಕದ ಇಂಗ್ಲಿಶ್ ಭಾಷೆ ನಮಗೆ ಸ್ವಲ್ಪ ಎಡಚಾಗುತ್ತದೆ. ಆದರೆ, ಆತ ಬರೆದ ಕಾಲದ ನೋಡುಗರಿಗೆ ಹಾಗೆ ಇರಲಿಕ್ಕಿಲ್ಲ. ಅಲ್ಲದೆ, ನಟರು ತಮ್ಮ ಅಭಿನಯದ ಮೂಲಕ ಅರ್ಥವನ್ನು ಸ್ಪಷ್ಟ ಮಾಡಲು ಅವಕಾಶವಿದ್ದೇ ಇರುತ್ತದೆ. ಹೀಗಿರಲು, ಕನ್ನಡದ ಅನುವಾದವು ಎಡಚಾಗುವ ಅವಶ್ಯಕತೆ ಇದೆಯೆ? ಈ ಅನುವಾದವನ್ನು ಇನ್ನಿಷ್ಟು ಸರಳವಾಗಿ ಮಾಡಲು ಸಾಧ್ಯವಿತ್ತೆ? ನಿಮ್ಮ ಅನುವಾದಕ್ಕೆ ನೂರಕ್ಕೆ ನೂರರಷ್ಟು ಗುಣಗಳನ್ನು ಕೊಟ್ಟೇ, ಈ ಪ್ರಶ್ನೆಯನ್ನು ನಿಮಗೆ ಕೇಳುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.com